Friday, April 22, 2011

ನೋಟು ನಾಣ್ಯಗಳ ಸ೦ಗ್ರಹದ ಕಿರುನೋಟ.....

ಇವತ್ತು   ಜಗತ್ತಿನಲ್ಲಿ    ದುಡ್ಡು   ಇಲ್ದೇ   ಯಾವ   ಕೆಲ್ಸನೂ  ಆಗ್ತಿಲ್ಲೆ...ಎಲ್ಲವ್ದಕ್ಕೂ   ದುಡ್ಡೇ   ಬೇಕು...ಆ ದುಡ್ಡು   ನಮ್ ದೇಶದಲ್ಲಿ  ನೋಟೂ  ಆಗ್ಲಕ್ಕು  ,ಇಲ್ಲೆ  ಅ೦ದ್ರೆ  ನಾಣ್ಯ ನೂ  ಇರ್ಲಕ್ಕು...
      ಆ  ನೋಟ್ನಾ   ರಿಸರ್ವ್   ಬೇ೦ಕು  5,   10 ,  20  ,  50 , 100 ,  500 ,  1000  ರೂಪಾಯ್ ದಾ  ಪ್ರಿ೦ಟ್  ಮಾಡಿ  ಸ೦ಬ೦ಧಪಟ್ಟ  ಬೇ೦ಕಿಗೆ  ಕಳ್ಸ್ತು...ಅದ್ರ್ನಾ  ಆ  ಬೇ೦ಕ್ನೋರು  ಜನಸಾಮಾನ್ಯರ್ಗೆ   ಚಲಾವಣೆಗೆ   ಕೋಡ್ತೋ....ಅಷ್ಟೇ   ಕಿಮ್ಮತ್ತಿನ  ಚಿಲ್ಲರೆ  ಆಗಿ ,  ಇಲ್ದಿದ್ರೆ   ಅಕ್ಳ  ಉಳಿತಾಯ  ಖಾತೆಯಿ೦ದ,  ಅಥ್ವಾ   ಸಾಲಾ ಆಗಿ ,ಅಲ್ಲಾ   ಬೇರ್ಬೇರೆ   ರೂಪ್ದಲ್ಲಿ   ಜನ್ರಿಗೆ  ಸಿಕ್ತು....  ಬೇ೦ಕಿಗೆ  ಬ೦ದ   ಆ  ನೋಟ್ ನ   ಪೆಟ್ಗೇಲಿ    ಬೇರ್ಬೇರೆ   series ದು   1,00,000  ನೋಟ್ನ  ಕಟ್ಟಲ್ಲಿ  ವಿಶಿಷ್ಟ   ನ೦ಬರ್ ಇಪ್ಪಾ  ನೋಟಿರ್ತು....ಅ೦ತಾ  ನೋಟೆಲ್ಲವಾ  ಯಾರ್  ಕೈಗೂ  ಬರ್ಲಕ್ಕು...ನನ್ನ  ಯಜಮಾನ್ರಿಗೆ  ಹಾಗಿದ್ದ   ನೋಟ್ನಾ  ಒಟ್ಟ್  ಮಾಡೋ ಹೇಳಿ  ಆಸೆ  ಆಯ್ಕ೦ಡು   ಜನ್ರಿಗೆ  ಕೊಡಕಾದ್ರೆ  ನೆನ್ಪಾದಾಗ  ತೆಗ್ದಿಟ್ಟದ್ದು  ,  ಮತ್ತೆ   ಬೇರೆಯವ್ರಿಗೆ  ಸಿಕ್ಕದ್ ನಾ    ಕೇಳಿ  (ಕೆಲ್ವೊ೦ದು  ಸಲ  ಹೆಚ್ಗೆ  ದುಡ್ಡು ಕೊಟ್ಟೀ )  ತಕ೦ಡದ್ದು   ಸುಮಾರಿಷ್ಟು  ಇದ್ದು...

     ಎಲ್ಲವ್ದನ್ನೂ   ತನ್ನ  ಪ್ಯಾ೦ಟ್  ಕಿಸೆಲಿ  ಇಟ್ಕತ್ತಿದ್ದ್ರು.....ಒ೦ದ್ಸಲ  ಭಟ್ಕಳದಿ೦ದ   ಊರಿಗೆ  (ಕರ್ಕಿ)  ಹೋಗಕಾದ್ರೆ   ಲೋರಿಲಿ   ಅ೦ತಾ  ನೋಟ್ ಇಟ್ಕ೦ಡ  ಪರ್ಸ್ ನಾ  ಕಳ್ಕ೦ಡು   ಅ೦ಕೋಲಾವರೆಗೂ   ಹಸಿದ  ಹೊಟ್ಟೆಲಿ    ಹುಡ್ಕುಲೆ  ಹೋಗಿ  ಸಿಕ್ಕಗದ್ದೆ  ಬೇಜಾರಿ೦ದ   ವಾಪಸ್  ಬ೦ದ್  ಕತೆನೂ  ಇದ್ದು....ಅದ್ರ  ನ೦ತ್ರ  ಸುಮಾರ್   ನೋಟ್ ನಾ  ಒಟ್ಟ್  ಮಾಡಿ   ಇಟ್ಕ೦ಡಿದ್ದನ್ನಾ  ನಿ೦ಗೋಕೆಲ್ಲಾ  ತೋರ್ಸೊ  ಹೇಳಿ  ಈ ಪ್ರಯತ್ನ.....







ಇದ್ರಲ್ಲಿ  111111 ರಿ೦ದ  999999 ರವರೆಗಿನ ನ೦ಬರ್  ಇದ್ದದ್ದನ್ನ  ನೋಡಿ...ಇದೆಲ್ಲವಾ  ಒ೦ದ್ ಲಕ್ಷ  ನೋಟ್ ನಲ್ಲಿ  ಒ೦ದೊದು  ಇಪ್ದು..



.ಮೇಲಿದ್ದ   ಹತ್ತು ಮತ್ತು  ನೂರರ   ನೋಟು   ಹತ್ತು  ಲಕ್ಷಕ್ಕೊ೦ದು  ಸಿಗುದು  ಅಪರೂಪ  ನೋಡಿ...


ಮೇಲಿದ್ದ   ಆರೂ  ನೂರರ   ನೋಟಿನಲ್ಲಿ   ಲಕ್ಷಕ್ಕೊ೦ದು  ಇಪ್ಪ   ನ್೦ಬರ್   ಇದ್ದು......



ಮೇಲಿದ್ದ  ಎಲ್ಲಾ  ನೋಟ್ ನಾ  ನ೦ಬರ್   ನಾ  ಗ್ರಹಿಸಿ......ಎಲ್ಲದ್ರಲ್ಲೂ 444444 ಇದ್ದು ಅಲ್ದಾ!!!!!!




ಇಲ್ಲಿ   ಮೇಲಿದ್ದ  ನೋಟಲ್ಲೂ   ಲಕ್ಷಕ್ಕೆ  ಒ೦ದು  ನ೦ಬರ್   ಇಪ್ಪಾ  ಬೇರೆ -ಬೇರೆ   ನೋಟು   ಇದ್ದು  ಅಲ್ದಾ........



ಇನ್ನು ಮೇಲೆ ತೋರ್ಸ್ದಾ ( ಒ೦ದ್ರಿ೦ದ ನೂರರ ತನ್ಕ) ನೋಟನ್ನೆಲ್ಲಾವಾ R.B.I. ಚಲಾವಣೆಯಿ೦ದ ಹಿ೦ದಕ್ಕೆ ತಕ೦ಡ್ದು...

ಕೆಳ್ಗೆ   ತೋರ್ಸ್ದ  ನೂರ್ರ್   ನೋಟ್   ನಲ್ಲಿ   ನ೦ಬರು  ಒ೦ದೇ  ಕಡೆ   ಪ್ರಿ೦ಟ್   ಆಯ್ದು.  ಮತ್ತೊ೦ದ್ರಲ್ಲಿ  Security Thread
ಮೇಲೆ   ಎದ್   ಬ೦ದದ್ದು   ಕಾಣ್ತು.  (ಯಾವ್   ನೋಟ್   ನಲ್ಲೂ   ಹಾ೦ಗೆ   ಇರ್ತಿಲ್ಲೆ ).


  ಮೇಲಿದ್ದ   ಮೂರೂ   ನೋಟು  MisPrint  ಆಗಿ   ತಪ್ಪಿ, ಚಲಾವಣೆಗೆ ಬ೦ದು......ನೋಡಿ..........
ಇದೇ  ರೀತಿ   ವಿಶಿಷ್ಟ   ನೋಟ್  ಕ೦ಡ್  ಕೂಡ್ಲೆ  ಹೆಚ್ಗೆ   ದುಡ್ಡು   ಕೊಟ್ಟಿ   ತಕ೦ಬ್ದ   ನೋಡಿ  ನಮ್ಮನೆಯವ್ರ  ಗೆಳೆಯ "ನನ್ನ  ಹತ್ರ  50  ರ  MisPrint  ಆದ  ನೋಟಿಗೆ  100  ರೂ.  ಕೊಡು  " ಹೇಳ್ದಾ...ದುಡ್ಡು   ತಗ೦ಡ್   ಮೇಲೆ  ಅ೦ವ   ಕೊಟ್ಟಿದ್ದು    ಎ೦ತದು   ಗೊತ್ತಿದ್ದಾ..?   50  ರೂ . size  ನ  ಕಾಗದ   ಕಟ್  ಮಾಡಿ   ಕೊಟ್ಗ೦ಡು   "ನೋಡು..!!!  ಇದರಲ್ಲಿ   ಎರಡೂ  ಕಡೆ   ಪ್ರಿ೦ಟೇ  ಮಾಡಿದ್ವಿಲ್ಯಲ...."  ಹೇಳ್ದ.....
ಹೀ೦ಗೆ   ಸುಮಾರ್  ಸರ್ತಿ  ಬೇಸ್ತ್ ಬಿದ್ದ  ನಮ್ಮೆಜಮಾನ್ರು  ಎಲ್ಲರ  ನಗೆಗೆ  ಕಾರಣ  ಆದದ್ದೂ   ಇದ್ದು....

ಕೆಳ್ಗೆ  MIS PRINT  ಆದ  ನಾಣ್ಯವೂ  ಇದ್ದು...........





ಹಾ೦ಗೆಯಾ... ಹಳೇ   ಕಾಲದಲ್ಲಿ   ಬಳಸಿದ   ಕೆಲವು  ಸ್ವದೇಶೀ  ನಾಣ್ಯ ,  ವಿದೇಶೀ  ನೋಟು  ಹಾಗೂ  ನಾಣ್ಯಗಳನ್ನ  ನೋಡಿ ಖುಶಿ   ಪಡ್ತ್ರಿ   ಹೇಳಿ   ತೆಳ್ಕತ್ತೆ ..................................



ಇದಿಷ್ಟು   ನೋಟ್    ಒಟ್ಟು  ಮಾಡಕಾದ್ರೆ   ೧೫ -೨೦   ವರ್ಷ   ಬೇಕಾಯ್ದು...ಹಾಗೇ   ಒ೦ದೊ೦ದಕ್ಕೆ  ಅದ್ರ   ಕಿಮ್ಮತ್ತಿಗಿ೦ತ   ಹೆಚ್ಗೆ   ಕೊಟ್ಟು   ತಗ೦ಡದ್ದೂ    ಇದ್ದು...............................ಒಟ್ಟ್ನಲ್ಲಿ   ಇದೊ೦ದು   ಹವ್ಯಾಸ......................................................

ಹೀಂಗೆ  ನಿಂಗಳ  ಹತ್ರ   ಇದ್ದ ನೋಟನ್ನು ಖರ್ಚು  ಮಾಡಕದ್ರೆ ಅದರಲ್ಲಿ  ವಿಶಿಷ್ಟ  ನಂಬರು ಇದ್ದ ನೋಡಿ.: - ಹುಟ್ಟಿದ   ದಿನಾಂಕ,ಮದುವೆ ಆದ ದಿನ ಎಲ್ಲಾ ಇರ್ಲಕ್ಕು ಅದರಲ್ಲಿ........

ಈ ನೋಟು ನಾಣ್ಯ ಸಂಗ್ರಹದ ಕುರಿತು  ನಿಂಗಳ ಅಂಬೋಣ ಏನು?  





  

Wednesday, April 20, 2011

ಕಚೇರಿಯಲ್ಲಿ ಕಿರಿಕಿರಿ.........ಸಹೋದ್ಯೋಗಿಗಳ ಕೀಟಲೆ........

ನಮ್ಮ  ಯಜಮಾನರು  ಮೊಬೈಲ್  ಖರೀದಿಸಿದ  ಮೊದಲ  ದಿನ  ಕೆಲಸ ಮಾಡುವ  ಬ್ಯಾ೦ಕ್ ನಲ್ಲಿಯ  ಸಹೋದ್ಯೋಗಿಗಳಿಗೆಲ್ಲ  ತನ್ನ  ನ೦ಬರು ಕೊಟ್ಟರು.   ಆಕರ್ಷಕ  ಹೊಸ  ಸೆಟ್ಟನ್ನು  ಅವರೆಲ್ಲ  ಹೊಗಳಿದ್ದರಿ೦ದ  ಯಜಮಾನರೂ  ಸಾಕಷ್ಟು ಉಬ್ಬಿದರೆನ್ನಿ......!

        

ಬ್ಯಾ೦ಕ್ ಗೆ  ಗ್ರಾಹಕರು  ಬರತೊಡಗಿದ೦ತೆಲ್ಲ  ಮೊಬೈಲ್  ರಿ೦ಗಣ  ಕೇಳಿ ಬರತೊಡಗಿತು.   ಕರೆಗೆ  ಓಗೊಡಲು  ಮೊಬೈಲ್   ಎತ್ತಿಕೊಳ್ಳಬೇಕೆನ್ನುವಷ್ಟರಲ್ಲಿ    ಕರೆ  ಕಟ್  ಆಗುತ್ತಿತ್ತು..ಹೀಗೇ  ದಿನಪೂರ್ತಿ   ಯಾರಾದರೊಬ್ಬರು  ಕರೆ  ಮಾಡುವದು  ,  ಅರ್ಧದಲ್ಲಿಯೇ  ಕಟ್  ಮಾಡುವದು  ,   ಬೆನ್ನ  ಹಿ೦ದೆ  ತಮಾಷೆಯಿ೦ದ   ಕಿಸಿ-ಕಿಸಿ  ನಗುವದು  ನಡೆಯುತ್ತಲೇ  ಇತ್ತು..ಬ೦ದ  ಗ್ರಾಹಕರು  " ಏನು  ಸಾರ್.., ಹೊಸ  ಮೊಬೈಲ್  ಕೊ೦ಡಿದ್ದೀರಾ ?  ನಮಗೆಲ್ಲಾ  ತೋರಿಸಲೆ೦ದು  ಆ  ರೀತಿ  ಮಾಡ್ತಿದ್ದೀರಾ..?  " ಎ೦ದು  ಪ್ರಶ್ನಿಸತೊಡಗಿದಾಗ    ನಮ್ಮೆಜಮಾನರಿಗೆ  ಕೋಪ  ಬ೦ದರೂ  ಸಹನೆಯಿ೦ದಲೇ  ಇದ್ದರು...

 ಹೀಗೇ  ಸ್ವಲ್ಪ   ದಿನ   ಕಳೆದಿರಲು   ಎಪ್ರಿಲ್    1  ಬ೦ದಿತು.  ನಮ್ಮ   ಮನೆಯವರನ್ನು   ಸುಲಭವಾಗಿ  ಬೇಸ್ತು  ಬೀಳಿಸಲು  ಒಬ್ಬೊಬ್ಬ   ಸಹೋದ್ಯೋಗಿಯೂ   ಪೈಪೋಟಿಯ  ಮೇಲೆ  "missed  call "  ಕೊಡತೊಡಗಿದರು..ಇವರು  ಸ್ಥಿತಪ್ರಜ್ಞರ೦ತೆ   ಕೆಲಸದಲ್ಲಿ   ತಲ್ಲೀನರಾಗಿದ್ದುದನ್ನು   ಕ೦ಡು  ಅವರಿಗೆ  ಅನುಮಾನ  ಬ೦ದಿತು...ಕರೆ  ಕಟ್  ಮಾಡದೇ   ಮಾತನಾಡಲು   ಮು೦ದಾದಾಗ  ಹೆಣ್ಣಿನ   ಸ್ವರ  ಕೇಳಿ  ಬರುತ್ತಿದ್ದ೦ತೆ   ಕರೆ  ಕಟ್  ಮಾಡತೊಡಗಿದರು..ಹೀಗೆ  7-8   ಗೆಳೆಯರು  ಪ್ರಯತ್ನಿಸಿದರು..ಕೊನೆಗೆ  ಕುತೂಹಲ  ತಡೆಯಲಾಗದೇ  ನಮ್ಮ  ಯಜಮಾನರ   ಹತ್ತಿರ  ಬ೦ದು  ಮೊಬೈಲ್  ಕೊಡಲು  ಕೇಳಿದರು..."ಮೊಬೈಲ್  ಇಲ್ರಯ್ಯಾ...ಮನೆಯಲ್ಲಿಯೇ  ಮರೆತು  ಬಿಟ್ಟು  ಬ೦ದಿರುವೆ."  ಎ೦ದಾಗ  ಸಹೋದ್ಯೋಗಿಗಳಿಗೆ   ತಾವೇ  ಬೇಸ್ತು  ಬಿದ್ದಿದ್ದು  ಅರಿವಾಯಿತು.   ಅಲ್ಲಿ೦ದಾಚೆಗೆ  "Missed Call" ಕೊಟ್ಟು ತಮಾಷೆ  ನೋಡುವ ಪ್ರವೃತ್ತಿ  ಕಡಿಮೆ  ಆಯಿತು.

ಮೊಬೈಲ್  ರಿ೦ಗಣಿಸಿದಾಗೆಲ್ಲ  ಕೆಲಸದ  ನಡುವೆಯೂ  ಒಮ್ಮೊಮ್ಮೆ  ನಗು  ಉಕ್ಕುತ್ತದೆ  ಎ೦ದು ನಮ್ಮೆಜಮಾನರು  ಆಗಾಗ  ಹೇಳುತ್ತಾ  ನಗಾಡುತ್ತಿರುತ್ತಾರೆ.........

ಶ್ರೀಮತಿ ಲಕ್ಷ್ಮೀ  ಜಗದೀಶ ಭಟ್ಟ ಬುರ್ಡೆ  ಕರ್ಕಿ.          ಸುಧಾ ವಿಶೇಷಾ೦ಕ,ಓದುಗರ ವಿಭಾಗ, 2003      

Thursday, April 7, 2011

ಮನೆಯಾಕೆಯ ಉಳಿತಾಯದ ಗುಟ್ಟು ........ಬಿ೦ದು-ಬಿ೦ದುವಿನಿ೦ದ ಸಿ೦ಧು.....

ನಮ್ಮ  ಮನೆಯಲ್ಲಿ  ಇ೦ತಿಷ್ಟೇ  ಖರ್ಚು  ಮಾಡುವದು, ಇ೦ತಿಷ್ಟೇ  ಉಳಿಸುವುದು  ಎ೦ಬ  ಪದ್ಧತಿಯಿಲ್ಲವಾದರೂ  ದಿನಸಿ  ಸಾಮಾನುಗಳನ್ನು  ಖರ್ಚಾದ೦ತೆ  ತರುವುದು, ಬಟ್ಟೆ, ಚಿನ್ನ  ಇತ್ಯಾದಿಗಳನ್ನು  ಅಗತ್ಯ  ಬಿದ್ದಾಗ  ಇಲ್ಲವೇ  ವಿಶೇಷ  ಸ೦ದರ್ಭಗಳಲ್ಲಿ  ಖರೀದಿಸುವ   ಪ್ರಕ್ರಿಯೆ   ನಡೆಯುತ್ತ  ಬ೦ದು  19  ವರ್ಷಗಳು  ನಿರಾತ೦ಕವಾಗಿ  ಕಳೆದುವೆ೦ದರೆ  ಒಮ್ಮೊಮ್ಮೆ  ನಮಗೇ  ಆಶ್ಚರ್ಯವೆನಿಸುತ್ತದೆ.. ಇರಲು  ಬೆಚ್ಚನೆಯ  ಮನೆ, ತಿರುಗಾಟಕ್ಕೆ  ಕಾರು, ಸ್ಕೂಟರ್, ಬ್ಯಾ೦ಕ್ ಲ್ಲಿ  ಉದ್ಯೋಗವಿರುವ  ಪತಿ, ಪದವಿ - ಪೂರ್ವ  ಕಾಲೇಜು,  ಮಾಧ್ಯಮಿಕ   ಶಾಲೆಗಳಲ್ಲಿ  ಓದುತ್ತಿರುವ  ಹೆಣ್ಣುಮಕ್ಕಳಿಬ್ಬರು,  ಭವಿಷ್ಯ  ಜೀವನ  ಊಹಿಸಿ   ಕ೦ಗೆಡದ  ಯಜಮಾನರ  ಸ್ವಭಾವವಿದ್ದಾಗ್ಯೂ  ಪ್ರಾಮಾಣಿಕತೆಯ  ನನ್ನ  ಉಳಿತಾಯ  ಕ್ರಮಗಳಲ್ಲಿ  ಕೆಲವು  ನಿಮ್ಮ  ಮು೦ದಿವೆ..
* ಮನೆ-ಕೆಲಸದವಳನ್ನು  ಇಟ್ಟುಕೊಳ್ಳದೆ   ಮನೆ ಕೆಲಸ  ನಾನೇ  ಮಾಡುತ್ತೇನೆ...
*ಇಸ್ತ್ರಿಗಾಗಿ  ಬೇರೆಡೆಗೆ  ಹೋಗುವದಿಲ್ಲ...
*ಬಾಯಿ  ಚಪಲತೆಯ  ತಿ೦ಡಿಗಳನ್ನು  ಮನೆಯಲ್ಲಿಯೇ ತಯಾರಿಸುತ್ತೇನೆ..ಇದರಿ೦ದ  ಆರೋಗ್ಯಕ್ಕೂ  ಒಳ್ಳೆಯದು,  ಖರ್ಚಿನಲ್ಲೂ ಉಳಿತಾಯ....
*ದಿನ - ನಿತ್ಯಕ್ಕೆ  ಬೇಕಾದ  ಹೂವು, ತುಳಸಿ, ಕರಿಬೇವು,, ಬಸಳೆ,, ತೊ೦ಡೆ  ಕಾಯಿ, ಬಾಳೆ ಕಾಯಿ  ಇತ್ಯಾದಿ  ಮನೆಯ  ಹಿತ್ತಲಿನಲ್ಲಿ  ಬೆಳೆಯುತ್ತೇನೆ..
* ಸೀರೆಗೆ  ಫಾಲ್ಸ್  ಹಚ್ಚುವದು, ರವಿಕೆ, ಮಕ್ಕಳ  ಬಟ್ಟೆ,  ದಿ೦ಬಿನ  ಕವರ್  ಇತ್ಯಾದಿಗಳನ್ನು  ನಾನೇ  ಹೊಲಿಯುವದರಿ೦ದ  ಹಣದ  ಉಳಿತಾಯದ  ಜೊತೆಗೆ   ಬಟ್ಟೆಯ  ಉಳಿತಾಯವೂ  ಆಗುತ್ತದೆ..ಮಿಕ್ಕ  ಬಟ್ಟೆಯಿ೦ದ  ಆಕರ್ಷಕ  ಪರ್ಸ್, ಬ್ಯಾಗ್ ಗಳನ್ನು  ಮಿತವ್ಯಯದಲ್ಲಿ  ತಯಾರಿಸುವದಲ್ಲದೇ  ಅಕ್ಕ-ಪಕ್ಕದ  ಗೆಳತಿಯರಿಗೂ  ಹೇಳಿಕೊಟ್ಟಿದ್ದರಿ೦ದ  ಗೆಳತಿಯರಿಗೂ  ಉಳಿತಾಯ  ಖಾತೆ  ತೆರೆಯಲು  ಸಹಾಯ  ಮಾಡಿದ೦ತಾಯಿತಲ್ಲವೇ..?
*ಚಿನ್ನ  ಖರೀದಿಸುವಾಗ  ಒಮ್ಮೆಲೇ  ಹಣ  ಸ೦ದಾಯ  ಮಾಡಲು  ಅಸಾಧ್ಯವಾದ   ಕಾರಣ  ತಿ೦ಗಳ  ಕ೦ತಿನಲ್ಲಿ  (ಲಾಟರಿ  ಯೋಜನೆಯೂ  ಇರುತ್ತದೆ )  ಹಣ  ಕಟ್ಟಿ  ವರ್ಷದ  ಕೊನೆಗೆ  ಬೇಕಾದ  ಆಭರಣ  ಖರೀದಿಸುತ್ತೇನೆ...
* ನಮ್ಮ  (ಹವ್ಯಕರಲ್ಲಿ ) ನೆ೦ಟರಿಷ್ಟರ  ಮನೆಗೆ  ಹೋದಾಗ  ಅಥವಾ  ನವರಾತ್ರಿ, ಶ್ರಾವಣ  ಮಾಸಗಳಲ್ಲಿ  ಅರಿಸಿನ- ಕು೦ಕುಮ  ಹಚ್ಚಿ   ಯಥಾನುಶಕ್ತಿ   ಹಣ  ಕೊಡುವ  ಸ೦ಪ್ರದಾಯವಿದೆ..  ಆ  ಹಣವನ್ನು  ಪ್ರತ್ಯೇಕ  ತೆಗೆದಿಟ್ಟು  ವರ್ಷಕ್ಕೊಮ್ಮೆ  ಪತಿ  ದೇವರ  ಖಾತೆಗೆ  ವರ್ಗಾಯಿಸುತ್ತೇನೆ..
*ಒ೦ದು  ವೇಳೆ  ಅನ್ನ- ಪದಾರ್ಥ  ಮಿಕ್ಕಿದರೆ  ಅವು  ಚೆನ್ನಾಗಿದ್ದರೆ  ಮರುದಿನದ   ಊಟಕ್ಕೆ  ಅಥವಾ  ಬೇರೆ  ಬಗೆಯ  ತಿ೦ಡಿ  ಮಾಡಲು  ಉಪಯೋಗಿಸುತ್ತೇವೆಯೇ  ಹೊರತು  ಚೆಲ್ಲುವದಿಲ್ಲ.. ಒ೦ದು  ವೇಳೆ  ಉಪಯೋಗಿಸುವ೦ತಿಲ್ಲವಾದರೆ  ಗು೦ಡಿಯೊ೦ದರಲ್ಲಿ  ಚೆಲ್ಲಿ  ಅದರ  ಮೇಲೆ  ಮಣ್ಣು,  ಸೊಪ್ಪು  ಹಾಕಿ  ಗೊಬ್ಬರ  ತಯಾರಿಸಿ  ನೆಟ್ಟ  ಗಿಡಗಳಿಗೆ  ಹಾಕುತ್ತೇನೆ..
*ಅಡಿಗೆ  ಮಾಡುವಾಗ  ತರಕಾರಿ,  ತೆ೦ಗಿನಕಾಯಿಗಳ  ಹಿತ-ಮಿತ  ಬಳಕೆ,  ಗ್ಯಾಸ್ ನ  ಸದುಪಯೋಗ,  ವಿದ್ಯುತ್  ನ  ಮಿತ  ಬಳಕೆ,  ಫೋನ್ ನಲ್ಲಿ  ಹಿತ-ಮಿತ  ಮಾತು  ಇತ್ಯಾದಿಗಳಿ೦ದ   ಉಳಿತಾಯವಾಗುವದನ್ನು  ಬರೆಯುತ್ತಾ  ಹೋದರೆ  ಸಮಯ  ಹೆಚ್ಚು  ಖರ್ಚಾಗಬಹುದಲ್ಲವೇ..?
ಈ  ಮೇಲೆ  ತಿಳಿಸಿದ  ಉಳಿತಾಯದ  ಮೌಲ್ಯವನ್ನು  ತಾವೇ  ಊಹಿಸಿ (ತಮ್ಮೆಲ್ಲರ  ಮನೆಗಳಲ್ಲಿಯೂ )  ಸ೦ಸಾರವೆ೦ಬ   ಬ್ಯಾ೦ಕಿನಲ್ಲಿ  ಉಳಿತಾಯದ  ಖಾತೆಯನ್ನು  ತೆರೆಯುತ್ತೀರೆ೦ದು  ಭಾವಿಸಲೇ...????

ಲಕ್ಷ್ಮಿ  ಜಗದೀಶ  ಭಟ್ಟ  ಬುರ್ಡೆ                ಸುಧಾ  ವಾರ  ಪತ್ರಿಕೆ .. . ಮಾರ್ಚ್  17   2005

Wednesday, April 6, 2011

ಹಬ್ಬದೂಟದ ನಡುವೆ.........ಕೆ೦ಪು ಮಡಿಯ ಅವಾ೦ತರ......

ಅ೦ದು  ನಮ್ಮಣ್ಣನ  ಮದುವೆ...ನಮ್ಮ  ಮನೆಯಲ್ಲಿಯೇ  ಸ೦ಭ್ರಮದ  ತಯಾರಿ  ನಡೆದು  ನೆ೦ಟರಿಷ್ಟರೆಲ್ಲ  ಒಬ್ಬೊಬ್ಬರಾಗಿ  ಸೇರತೊಡಗಿದ್ದರು..ಅವರಲ್ಲಿ ನಮ್ಮ  ಸ೦ಬ೦ಧಿಗಳಲ್ಲೊಬ್ಬರಾದ  ೪೦-೪೫ ವರ್ಷಗಳ  ಸ೦ಪ್ರದಾಯಬದ್ಧರಾದ  , ಗಡಿ-ಬಿಡಿ  ಸ್ವಭಾವದ  ಮಾವನವರು ನಮ್ಮೆಲ್ಲರೊಡನೆ  ಬೆರೆತು  ಉತ್ಸಾಹದಿ೦ದ  ಓಡಾಡುತ್ತಿದ್ದರು..
              ಮದುವೆಯ  ದಿನ  ಮುಹೂರ್ತ ಇತ್ಯಾದಿ  ಕಾರ್ಯಕ್ರಮಗಳು  ಮುಗಿದು  ಊಟದ  ತಯಾರಿಯೂ ನಡೆದಿತ್ತು.. ಮನೆ  ತು೦ಬಾ  ನೆ೦ಟರಿಷ್ಟರೂ, ಗೆಳೆಯರೂ  ತು೦ಬಿಕೊ೦ಡು  ಗದ್ದಲದ  ವಾತಾವರಣ ಏರ್ಪಟ್ಟು  ಕಳೆಗೊ೦ಡಿತ್ತು..ಆಗ ನಮ್ಮ  ಸ೦ಬ೦ಧಿ ಮಾವನವರು  ಊಟಕ್ಕೆ  ಕುಳಿತುಕೊಳ್ಳುವ  ಮೊದಲು  ನಾರು  ಮಡಿಯನ್ನುಡಲು  ಕೋಣೆಯಲ್ಲಿರುವ  ಗೂಟಕ್ಕೆ  ನೇತಾಡುವ  ಕೆ೦ಪು  ವಸ್ತ್ರವನ್ನು  ಸುತ್ತಿಕೊ೦ಡು  ಊಟಕ್ಕೆ  ಬಾಳೆ  ಎಲೆಯ  ಮು೦ದೆ  ಕುಳಿತರು..ಅಲ್ಲಿ  ಒಳಗಡೆ  ನಮ್ಮಜ್ಜಿಯು  ತನ್ನ  ಕೆ೦ಪು   ಸೀರೆಯು  ಎಲ್ಲೂ  ಕಾಣುವದಿಲ್ಲ,,ಯಾರೋ  ಕದ್ದಿರಬೇಕೆ೦ದು  ಬೊಬ್ಬೆ  ಹೊಡೆಯುತ್ತಿದ್ದರು.. ( ನಮ್ಮಲ್ಲಿ  ವಿಧವೆಯರು  ಕೆ೦ಪು  ಸೀರೆಯನ್ನು  ತಲೆ  ಮೇಲೆ  ಹೊದ್ದು  ಉಡುವದು  ಹಳೆ ವಾಡಿಕೆ ) ಹಾಗೆಯೇ  ತನ್ನ  ಸೀರೆಗಾಗಿ  ಬೊಬ್ಬಿಡುತ್ತಾ ಹೊರಗೆ  ಊಟದ  ಜಾಗಕ್ಕೆ ಬ೦ದಾಗ  ಅದನ್ನು  ಮಾವನವರು  ಉಟ್ಟು ಕುಳಿತಿರುವದನ್ನು  ಕಒಡು  ತಬ್ಬಿಬ್ಬಾಗಿ  ಅವರನ್ನು  ಪ್ರಶ್ನಿಸುತ್ತಿದ್ದರು..ಇದನ್ನೆಲ್ಲ  ನೋಡಿ  ನೆ೦ಟರಿಷ್ಟರೆಲ್ಲ  ಗು೦ಪುಗೂಡಿ  ಏನೆ೦ದು  ವಿಚಾರಿಸತೊಡಗಿದಾಗ  ಮಾವನವರ  ಸ್ಥಿತಿ  ಹೇಗಾಗಿರಬೇಡ...!!!!!!!

ಲಕ್ಷ್ಮಿ   ಜಗದೀಶ  ಭಟ್ಟ  ಬುರ್ಡೆ  - ಭಟ್ಕಳ...                      ಸುಧಾ  ಯುಗಾದಿ  ವಿಶೇಷಾ೦ಕ  ೧೯೯೯
                                                                                       ಓದುಗರ  ವೇದಿಕೆ  ವಿಭಾಗ       

ಪ್ಲಾಸ್ಟಿಕ್ ಬಗ್ಗೆ ಒ೦ದಿಷ್ಟು............



ಸ್ವಲ್ಪ  ದಿನಗಳ ಹಿ೦ದೆ  ಊರಿಗೆ  ಹೋಗಿದ್ದಾಗ  ನನ್ನ ಅತ್ತೆ  ಮತ್ತು  ಮೈದುನನ  ಹೆ೦ಡತಿ  ಬಾಡಿದ  ಮುಖ  ಹೊತ್ತು  ಕುಳಿತಿದ್ದರು...ಪಕ್ಕದ  ಮನೆಯವರು  ಪ್ರೀತಿಯಿ೦ದ  ಸಾಕಿದ,  ಸಾಕ್ಷಾತ್  ದೇವರೆ೦ದು  ಪೂಜಿಸುತ್ತಿದ್ದ  ಆಕಳು  "ಸೀತೆ" ಯು  ಮು೦ಚಿನ  ದಿನ  ಒದ್ದಾಡುತ್ತಾ  ಪ್ರಾಣ  ಬಿಟ್ಟಿದ್ದನ್ನು  ಕಣ್ಣಾರೆ  ಕ೦ಡು  ಅದನ್ನು  ಮರೆಯಲಾಗದೇ  ದು:ಖಿಸುತ್ತಿದ್ದರು.
   
                                            


                 .ಸಾಯಲು   ಕಾರಣವಾದುದು  ಬೇರೇನೂ  ಅಲ್ಲ...ಹತ್ತಿರದ  ಕಲ್ಯಾಣ ಮ೦ಟಪದಲ್ಲಿ  ಪ್ರತಿದಿನವೂ  ಮದುವೆ  ಇತ್ಯಾದಿ  ಜರುಗುತ್ತಿರುತ್ತದೆ.. ಆ  ದಿನವೂ ಶ್ರೀಮ೦ತರ  ಮದುವೆಯೊ೦ದು  ಭಾರೀ ವೈಭವದಿ೦ದ  ಜರುಗಿತ್ತು....ಆಮ೦ತ್ರಿತರು  ತಿ೦ದು (ತಿನ್ನದೇ ) ಬಿಟ್ಟ  ಆಹಾರವನ್ನು  ಎಸೆದಿದ್ದರು...ಜೊತೆಗೆ ಅಲ್ಲಿ  ಬಿದ್ದಿದ್ದ  ಪ್ಲಾಸ್ಟಿಕ್   ಲೋಟಗಳು,  ಐಸ್-ಕ್ರೀಮ್  ಕಪ್,,ಚಮಚಗಳು  , ತಿ೦ಡಿ ತಿ೦ದ  ತಾಟುಗಳ  ಮಧ್ಯೆ  ಇರುವ  ಎ೦ಜಲು ಆಹಾರವನ್ನು  ತಿನ್ನುವಾಗ  ಪ್ಲಾಸ್ಟಿಕ್  ವಸ್ತುಗಳೂ  ಆ  ಮೂಕ  ಹಸುವಿನ   ಉದರವನ್ನು   ಸೇರಿಬಿಟ್ಟಿದ್ದವು..'ಸೀತೆ' ಯು  ಮನೆಗೆ  ಹಿ೦ದಿರುಗಿದ  ಮೇಲೆ  ಎ೦ದಿನ೦ತೆ  ಹುಲ್ಲು ಇತ್ಯಾದಿಗಳನ್ನು  ತಿನ್ನದಿರುವುದನ್ನು  ಕ೦ಡು  ಒಡತಿ   'ಅರುಣಾ' ಳು  ಪ್ರೀತಿಯಿ೦ದ  ಬೈದಳು..'.ಎಲ್ಲಿ  ತಿರ್ಗಲಿಕ್ಕೆ  ಹೋಗಿದ್ಯೆ...ಓಹ್..ಇವತ್ತು  ಮದುವೆ  ಇತ್ತಲ್ಲ್ವಾ..  ಆ  ಮದುವೆ  ಮನೆ  ಕೇಸರಿಭಾತ್  ರುಚಿ  ಮು೦ದೆ  ನಾ  ಕೊಡೊ  ಹಿ೦ಡಿ  ಎ೦ತಕೆ....ಸರಿ..ಸರಿ.. ದಿನಾಲೂ  ಬೇರೆಯವ್ರ  ಮನೇದು  ತಿ೦ದ್ಕೊ೦ಬ೦ದ್ರೆ   ನಿ೦ಗೆ ಮನೇಲಿ  ಕೊಡ್ತ್ನಿಲ್ಲೆ    ನೋಡು 'ಎ೦ದು  ಬೆನ್ನು  ನೇವರಿಸಿ  ' ಮು೦ದಿನ  ತಿ೦ಗಳು  ನೀನು  ಅಮ್ಮನಾಗ್ತೆ  '  ಎ೦ದು  ಉಬ್ಬಿದ  ಹೊಟ್ಟೆಯನ್ನು  ಸವರಿ  ಮುದ್ದು  ಮಾಡಿದಳು..
     ಮರುದಿನ  ಗೋಮಯವನ್ನು  ತರಲು  ಕೊಟ್ಟಿಗೆಗೆ  ಬ೦ದ್ರೆ  ಸೀತೆಯು  ಹಾಕಿದ  ಹುಲ್ಲನ್ನು ತಿನ್ನದೇ ಸ೦ಜೆಯ  ಹಾಗೆಯೇ ನಿರುತ್ಸಾಹದಿ೦ದಿದ್ದಳು..ಸ್ವಲ್ಪ ಗಾಬರಿಯಾದರೂ ತಾನು  ತಿ೦ಡಿ  ತಿ೦ದು  ಅಕ್ಕಚ್ಚು  ಕೊಡಲು  ಬ೦ದರೆ  ಇನ್ನೂ  ಮಲಗಿ  ಬಾಯಿ  ತು೦ಬಾ  ಜೊಲ್ಲು  ಹರಿಸುವದನ್ನು  ನೋಡಿ  ಗ೦ಡ- ಮಗನನ್ನು ಕರೆದಳು..ಕೂಡಲೆ  ಪಶು ಡಾಕ್ಟರ ಗೂ  ಫೋನ್  ಮಾಡಿ  ಪರಿಸ್ಥಿತಿ  ತಿಳಿಸಿದರು..ಅವರು  ಬರುವ  ತನಕ  ತಮಗೆ ತಿಳಿದ ಮನೆ ಔಷಧ  ಮಾಡಿದರು... ಸೀತೆ  ಬಾಯಿ  ತೆರೆಯದೆ  ಕಣ್ಣಲ್ಲೂ  ನೀರು  ಹರಿಸುತ್ತಾ  ಒಡತಿಯತ್ತ   ದೈನ್ಯವಾಗಿ  ನೋಡುವದನ್ನು  ಕ೦ಡು   ಅಮ್ಮ -ಮಗ  ಇಬ್ಬರೂ  ಮುಖ -ಮುಖ ನೋಡಿ  ಅಳತೊಡಗಿರುವಾಗಲೇ   ಡಾಕ್ಟರ್ ಬ೦ದು  ಪರೀಕ್ಷಿಸಿ  ಆಹಾರ  ಏನು  ಕೊಟ್ಟಿರಿ  ಎ೦ದು  ಕೇಳಿದರು.. ನಿನ್ನೆಯಿ೦ದ  ಏನೂ  ತಿ೦ದಿಲ್ಲ  ..ಬಹುಶ:  ಮದುವೆ  ಮನೆ  ತಿ೦ಡಿ ಅಜೀರ್ಣ  ಆಗಿರಬೇಕು  ಎ೦ದಳು..ಆದರೆ  ಡಾಕ್ಟರ್ ರು' ಹೊಟ್ಟೆ  ಉಬ್ಬರಿಸಿದೆ..ಒಳಗಡೆ  ತಿ೦ಗಳು  ತು೦ಬಿದ  ಕರುವಿನ೦ತೆ  ಕಾಣುವದಿಲ್ಲ..ಬೇರೆ  ಏನೋ  ಸೇರಿದ೦ತೆ  ಇದೆ' ಯೆ೦ದು  ಸಹಾಯಕನೊಡನೆ  ಹೊಟ್ಟೆಯೊಳಗೆ  ಕೈ  ಹಾಕಿ  ಕೆ.ಜಿ. ಗಟ್ಟಲೆ  ಪ್ಲಾಸ್ಟಿಕ್   ಹೊರತೆಗೆದರು...'ಅಮ್ಮ  ಇಷ್ಟೊ೦ದು  ಪ್ಲಾಸ್ಟಿಕ್  ತಿ೦ದರೆ  ಹೇಗಮ್ಮಾ...ತಿ೦ದ  ಆಹಾರ  ಜೀರ್ಣ ಆಗುವದು  ಹೇಗೆ  '  ಎ೦ದು  ಬಯ್ಯತೊಡಗಿದರು..ತು೦ಬಿದ  ಬಸುರಿ  ಸೀತೆ  ನ೦ತರ  ಚೇತರಿಸಿಕೊಳ್ಳದೇ  ಜೀವ ಬಿಡುವಾಗ  ತು೦ಬಾ  ಒದ್ದಾಡಿಬಿಟ್ಟಿತು.....
..    ಇವನ್ನೆಲ್ಲ  ಪ್ರತ್ಯಕ್ಷ  ಕ೦ಡ  ನಮ್ಮ  ಅತ್ತೆಗೆಲ್ಲಾ  ಒ೦ದೇ  ಚಿ೦ತೆ...ಈ ಪ್ಲಾಸ್ಟಿಕ್ ನ್ನು  ನಮ್ಮ ಮನೆಯ  ಹಸುಗಳೂ  ತಿ೦ದರೆ...???ಅವುಗಳ  ಗತಿ....???...ಹಳ್ಳಿಯಲ್ಲಿ   ಹಸುಗಳನ್ನು  ಹೊರಗೆ  ಬಿಡದೆ  ಇಡೀ ದಿನ  ಕಟ್ಟಿ  ಹಾಕಲಾಗುವದಿಲ್ಲ...ಈ  ಹಸುಗಳೂ  ಈಗೀಗ  ಕಾಡಿಗೆ.!! ( ಅಲ್ಲಿ  ಮೇಯಲು  ಮೊದಲಿನ೦ತೆ  ಹುಲ್ಲು ,ಗಿಡ-ಗ೦ಟಿಗಳು  ಇದ್ದರೆ  ತಾನೇ )  ಹೋಗದೇ  ದಾರಿಯಲ್ಲಿ  ಮನುಜರು  ಎಸೆದ  ಕಸದ  ರಾಶಿಯಲ್ಲಿ  ತಮ್ಮ  ಆಹಾರವನ್ನು  ಹುಡುಕತೊಡಗಿದ್ದಾವೆ..ಭವಿಷ್ಯದ  ಚಿ೦ತೆಯಿಲ್ಲದೆ  ವರ್ತಿಸುತ್ತಿರುವ  ಈ  ಮಾನವನಿಗೆ  ಅ೦ದು  ಗೋವಿನ  ಹಾಡಿನಲ್ಲಿ  ಹೇಳಿದ  ಸಾಲುಗಳು  " ನೀನಾರಿಗಾದೆಯೋ  ಎಲೆ  ಮಾನವ "  ಅನ್ವಯವಾಗುತ್ತಿದೆ...ಈ  ಮೂಕ  ಪ್ರಾಣಿಗಳ  ಪ್ರಾಣಕ್ಕೆ ಎರವಾಗುತ್ತಿರುವ  ಪ್ಲಾಸ್ಟಿಕ್  ತ್ಯಾಜ್ಯಗಳ  ದುಷ್ಪರಿಣಾಮಗಳ  ಕುರಿತು ಚಿ೦ತಿಸುತ್ತಿದ್ದರು...
             ಈ ಮೇಲಿನದು  ಪ್ಲಾಸ್ಟಿಕ್ ನ  ಮಾರಕ  ಪರಿಣಾಮದ  ಒ೦ದು  ಚಿಕ್ಕ  ಉದಾಹರಣೆ.  ಮಾತ್ರ......ಇ೦ದು  ಈ  ಜಗತ್ತಿನಲ್ಲಿ   ಪ್ಲಾಸ್ಟಿಕ್  ವಸ್ತುಗಳು  ಎಲ್ಲ  ಕಡೆಯೂ  ಕಾಣಸಿಗುತ್ತಿವೆ...ಅವು  ದಿನೇ-ದಿನೇ  ಬೇರೆ  ಬೇರೆ  ರೂಪಗಳಲ್ಲಿ  ಜನ್ಮ  ತಾಳುತ್ತಿವೆ..ಅವುಗಳನ್ನು  ಸೂಕ್ತ  ಕಡೆ  ಸರಿಯಾದ  ಕ್ರಮಗಳಲ್ಲಿ  ಬಳಸಿದರೆ  ಪೂರಕವೆನ್ನುವದರಲ್ಲಿ  ಸ೦ಶಯವಿಲ್ಲ... ಆದರೆ ಉಪಯೋಗಿಸಲು  ಅನರ್ಹವೆನಿಸಿದ  ತ್ಯಾಜ್ಯಗಳು   ಮನುಷ್ಯರಿಗೆ,  ಮೂಕ  ಪ್ರಾಣಿಗಳಿಗೆ , ಪರಿಸರದ  ಮೇಲೆ  ಬೀರುವ  ದುಷ್ಪರಿಣಾಮಗಳನ್ನು  ಅವಲೋಕಿಸಿದಾಗ   ಪ್ರಜ್ನಾವ೦ತರಾದ  ನಾವೇನು  ಮಾಡಲು   ಸಾಧ್ಯವೆ೦ದು  ತಿಳಿಯಲು  ಈಗ  ಪರಿಹಾರೋಪಾಯದ   ಮಾರ್ಗದತ್ತ  ಸಾಗೋಣ..
              ಇ೦ದು  ಪ್ರತಿಯೊ೦ದು  ಜಿಲ್ಲೆಯಾದ್ಯ೦ತ  ಪ್ಲಾಸ್ಟಿಕ್  ನಿಷೇಧ  ಆದೇಶವನ್ನು  ಜಾರಿಗೆ   ತರುತ್ತಿವೆ.. ತ್ಯಾಜ್ಯಗಳನ್ನು  ವೈಜ್ನಾನಿಕವಾಗಿ  ಸ೦ಸ್ಕರಿಸುವದು  ಮತ್ತು  ಪ್ಲಾಸ್ಟಿಕ್ ಮುಕ್ತ  ವಾತಾವರಣ  ನಿರ್ಮಿಸಲು  ಎಲ್ಲೆಡೆ  ಸರ್ವ ಪ್ರಯತ್ನಗಳು  ನಡೆಯುತ್ತಲಿವೆ...ಪ್ಲಾಸ್ಟಿಕ್  ನಿಷೇಧಕ್ಕಾಗಿ  ಕಠಿಣ   ಕಾನೂನು  ಕ್ರಮಗಳು  ಗ್ರಾಮಾ೦ತರ  ವಲಯಗಳು,  ಜಿಲ್ಲಾ  ಪ೦ಚಾಯಿತ,  .ಮಹಾನಗರ  ಪಾಲಿಕೆಗಳಲ್ಲಿ   ಈಗಾಗಲೇ  ಜಾರಿಯಲ್ಲಿವೆ...ಅ೦ತಹ  ಆ೦ದೋಲನದಲ್ಲಿ   ನಾವೆಲ್ಲ  ಭಾಗಿಗಳಾಗಿ  ನಮ್ಮ  ಅಳಿಲು  ಸೇವೆಯನ್ನು  ಸಮರ್ಪಿಸೋಣ...
        ಬೆಳಿಗ್ಗೆ  ಏಳುವಾಗ .ಹಲ್ಲುಜ್ಜುವ  ಬ್ರಶ್  ನಿ೦ದ    ಪ್ಲಾಸ್ಟಿಕ್ ನ  ನಮ್ಮ  ಸ್ನೇಹ  ಶುರುವಾದರೆ   ರಾತ್ರಿ  ಮಲಗುವ   ತನಕ    (ಪ್ಲಾಸ್ಟಿಕ್ )  ಗೆಳೆಯನನ್ನು  ಸುಲಭದಲ್ಲಿ  ಬಿಟ್ಟು  ಬಿಡಲು  ತಯಾರಿರುವದಿಲ್ಲ...ಇತ್ತೀಚೆಗ೦ತೂ  ಪ್ರತಿಯೊ೦ದು   ವಸ್ತುಗಳೂ  ಪ್ಲಾಸ್ಟಿಕ್ ನಿ೦ದ  ತಯಾರಾದವುಗಳು..ಚಿಕ್ಕ  ಮಕ್ಕಳು  ಆಡುವ  ವಸ್ತುಗಳು , ನಲಿಯುವ  ಪರಿಸರ, ಮಲಗುವ  ಹಾಸಿಗೆ, ಇತ್ಯಾದಿಗಳೂ ಸಹ ಪ್ಲಾಸ್ಟಿಕ್ ಮಯ..
       .ಮೊದಲೆಲ್ಲ  ಕಟ್ಟಿಗೆ,  ಕಬ್ಬಿಣ ಇತ್ಯಾದಿಗಳ ಬಳಕೆ  ತು೦ಬಾ  ಇರುತಿತ್ತು...ಅವುಗಳ  ಬಳಕೆಯಿ೦ದ  ಯಾರಿಗೂ  ಹಾನಿಯಿರುತ್ತಿರಲಿಲ್ಲ..ಆದರೆ  ಅವುಗಳ  ಸ್ಥಾನವನ್ನು  ಈಗ  ಪ್ಲಾಸ್ಟಿಕ್   ಆವರಿಸಿಕೊ೦ಡಿದೆ....ಕಾಲ  ಬದಲಾದ೦ತೇ   ಬಳಸುವ  ಸಾಮಗ್ರಿಗಳೂ  ಆವಿಷ್ಕಾರ  ಹೊ೦ದುವುದು  ಸಹಜ...ಆದರೆ  ಅವು   ಹಾಳಾದ  ಮೇಲೆ, ಅಥವಾ  ನಿರುಪಯುಕ್ತಗೊ೦ಡ  ಮೇಲೆ  ಅವುಗಳನ್ನು   ಸಿಕ್ಕ-ಸಿಕ್ಕಲ್ಲಿ  ಎಸೆಯುವದು   ಪರಿಸರಕ್ಕೆ  ಎಷ್ಟು ಹಾನಿಕರ  ಎ೦ಬುದು  ಎಲ್ಲರಿಗೂ  ಗೊತ್ತಿರುವ  ವಿಷಯವೇ  ಸರಿ..   ಪ್ಲಾಸ್ಟಿಕ್  ವಸ್ತುಗಳು  ನೀರಿನಲ್ಲಿ  ಕರಗುವದಿಲ್ಲ....ಮಣ್ಣಿನಲ್ಲಿ ಕೊಳೆಯುವದಿಲ್ಲ.. ಬೆ೦ಕಿಯಲ್ಲಿ  ಸುಡುತ್ತವಾದರೂ  ಅವುಗಳಿ೦ದ  ಹೊರಹೊಮ್ಮುವ  ರಾಸಾಯನಿಕಗಳು  ವಾತಾವರಣವನ್ನು  ಕಲುಷಿತಗೊಳಿಸುವದಲ್ಲದೇ  ಕೆಟ್ಟ  ದುರ್ಗ೦ಧವನ್ನು  ಬೀರುತ್ತವೆ...ಅಲ್ಲದೇ  ಅವು  ಮಣ್ಣಿನಲ್ಲಿ  ಕೊಳೆಯುವದಿಲ್ಲವಾದರೂ  ಮರ-ಗಿಡಗಳ  ಬೇರುಗಳೆಡೆಯಲ್ಲಿ   ಸಿಕ್ಕು  ಅವುಗಳ  ಬೆಳವಣಿಗೆಯನ್ನು  ಕು೦ಠಿತಗೊಳಿಸುತ್ತವೆ.. ಹಾಗಾಗಿ  ಪ್ಲಾಸ್ಟಿಕ್   ತ್ಯಾಜ್ಯಗಳನ್ನು  ಸೂಕ್ತ  ರೀತಿಯಲ್ಲಿ   ಸ೦ಸ್ಕರಣೆ  ಮಾಡಬೇಕಾಗುತ್ತದೆ...ಇತ್ತೀಚಿನ  ದಿನಗಳಲ್ಲಿ  ಎಚ್ಚೆತ್ತ   ಸರಕಾರವು  ಪ್ಲಾಸ್ಟಿಕ್  ಬಳಕೆದಾರರ ಮೇಲೆ  ಕಠಿಣ  ಕ್ರಮಗಳನ್ನು  ಹಮ್ಮಿಕೊ೦ಡಿದೆ...
     ಪ್ಲಾಸ್ಟಿಕ್  ತ್ಯಾಜ್ಯವು  ಮಾನವ  ಹಾಗೂ  ಇತರ  ಜೀವಿಗಳಿಗೆ  ಕ೦ಟಕಕಾರಿಯಾಗಬಾರದು...ನಗರಗಳಲ್ಲಿ  ಪ್ರತಿದಿನದ  ಕಸದ  ವಿಲೇವಾರಿಗೆ  ಹಲವು  ದಾರಿಗಳಿವೆ..ಆದರೆ  ಕೆಲವೊ೦ದು  ಕಡೆ  ಆ ತ್ಯಾಜ್ಯಗಳನೆಲ್ಲ  ಕೊ೦ಡೊಯ್ದು  ವಸತಿ ರಹಿತ  ಪ್ರದೇಶಗಳಲ್ಲಿ   ಚೆಲ್ಲಿ  ಕೈ  ತೊಳೆದುಕೊ೦ಡುಬಿಡುತ್ತಾರೆ.. ಆ  ಕಡೆ  ಹೋದಾಗ  ಅಲ್ಲಿಯ  ದುರ್ಗ೦ಧ  ಕಿಲೋಮೀಟರ್ ವರೆಗೂ  ಪಸರಿಸಿರುವುದನ್ನು  ನೋಡಿದಾಗ  ಗ್ರಾಮೀಣ  ಕತೆಯ ನುಡಿಯೊ೦ದು   ( ಬಾಲ  ಹೋಗಿ  ಡೋಲು ಬ೦ತು.....ಢು೦..ಢು೦..ಢು೦)  ನೆನಪಾಗುತ್ತದೆ..ಆ  ತ್ಯಾಜ್ಯಗಳಿಗೆ  ಮುಕ್ತಿ  ದೊರಕಿಸುವ  ನಿಟ್ಟಿನಲ್ಲಿ  ಪ್ರಯತ್ನಗಳು  ನಡೆಯುತ್ತಲಿವೆ..ನಾವೀಗ  ನಮ್ಮ  ಮನೆ  ಮತ್ತು  ಸುತ್ತಲಿನ   ಸ್ಥಳಗಳಲ್ಲಿ    ಕೊನೆಯ  ಪಕ್ಷ   ನಮ್ಮ  ಸುರಕ್ಷತೆಗೋಸ್ಕರವಾದರೂ  ಪ್ಲಾಸ್ಟಿಕ್  ರಹಿತ  ,ಪ್ಲಾಸ್ಟಿಕ್  ಮುಕ್ತ ಗ್ರಾಮ ವಾಗುವ೦ತೆ    ಮಾರ್ಪಡಿಸೋಣ..ನಾವು  ಇತರರಿಗೆ  ಮಾದರಿಯಾಗಿ  ಬದುಕೋಣ..
     ಸುಶಿಕ್ಷಿತರೆನಿಸಿದ  ಜನ-ಸಾಮಾನ್ಯರಾದ   ನಾವು   ಹೇಗೆ  ನಮ್ಮ  ಕೊಡುಗೆಯನ್ನು   ನೀಡಬಹುದು...??
           ಎ೦ದಿಗೂ  ಶ್ರೀ ಸಾಮಾನ್ಯರಾದ ನಾವು  ಈ  ಜಗತ್ತನ್ನು   ಯಾ  ದೇಶವನ್ನು  ಯಾ  ರಾಜ್ಯವನ್ನು  ಸ್ವಚ್ಛಗೊಳಿಸಲು   ಸಾಧ್ಯವಿಲ್ಲ,...ನಮ್ಮ  ಸುತ್ತಲಿನ  ಪ್ರದೇಶ  ಅಥವಾ  ನಮ್ಮ  ಮನೆಯ  ಸುತ್ತ-ಮುತ್ತ   ಮಾಲಿನ್ಯ  ರಹಿತ  ಸ್ಥಳವಾಗಿ  ಪರಿವರ್ತಿಸಿದರೆ   ಇಡೀ ಗ್ರಾಮ, ಜಿಲ್ಲೆ, ರಾಜ್ಯ, ದೇಶ  ಇತ್ಯಾದಿಗಳನ್ನು   ನಿರ್ಮಲ  ವಾಗಿ  ಇಟ್ಟ೦ತೆಯೇ  ಆಗುವದು....


          *  ಹಲ್ಲು ತಿಕ್ಕುವ  ಬ್ರಶ್  , ಪೇಸ್ಟ್  ಟ್ಯೂಬ್, ಶಾ೦ಪೂ  ಬಾಟಲಿಗಳ  ಉಪಯೋಗದ  ನ೦ತರ  ಒ೦ದೆಡೆ  ಸ೦ಗ್ರಹಿಸಿ  ಯಾವುದಾದರೂ  ಹಳೆಯ  ಪ್ಲಾಸ್ಟಿಕ್  ಸಾಮಾನು  ಕೊಳ್ಳುವವರಿಗೆ  ಕೊಟ್ಟರೆ  ಅವುಗಳನ್ನು  ಮರು  ಉತ್ಪಾದನೆ ಗಳಿಗೆ ಕೊ೦ಡೊಯ್ಯುತ್ತಾರೆ...


                                    
                                    

  * ಹಳೆಯ  ಪ್ಲಾಸ್ಟಿಕ್  ಡಬ್ಬ, ಬಕೆಟ್ ಗಳನ್ನು  ಬಿಸಾಡಬೇಡಿ.. ದಪ್ಪ  ಪ್ಲಾಸ್ಟಿಕ್  ಕವರ್ ಗಳೂ  ಸಹ  ಉಪಯೋಗಕ್ಕೆ  ಬರುತ್ತವೆ..ಅವುಗಳಲ್ಲಿ  ನಗರವಾಸಿಗಳು  (ಉಳಿದವರೂ)  ಲೋಳೆಸರ,  ಇನ್ ಸುಲಿನ್ ಗಿಡ, ವಿವಿಧ  ರೀತಿಯ ಹೂವಿನ  ಕು೦ಡ  ,ಗೊಬ್ಬರ  ಸ೦ಗ್ರಹ   ಮು೦ತಾದವುಗಳಿಗೆ  ಬಳಸಬಹುದು..ಹೀಗೆ  ಮನೆಯಲ್ಲಿ  ಸಾವಯವ  ( ಚಹ , ಕಾಫಿಯ  ಚರಟ, ತರಕಾರಿ  ಸಿಪ್ಪೆ  ಇತ್ಯಾದಿಗಳಿ೦ದ  ) ಗೊಬ್ಬರ  ಹಾಕಿ  ನಾವೇ  ಬೆಳೆದ  ತರಕಾರಿ,  ಹೂವು,  ಔಷಧೀಯ  ಗಿಡಗಳು  ನಮ್ಮ  ಆರೋಗ್ಯಕ್ಕೂ  ಒಳ್ಳೆಯದಲ್ಲದೇ  ಮನಸ್ಸಿಗೆ  ಮುದ  ನೀಡುತ್ತವೆ...


                                                                             
                                       



  *  ದಿನಾಲೂ   ಮಾರ್ಕೆಟ್  ಕಡೆ   ಹೋಗುವಾಗ  ಮನೆಯಲ್ಲಿರುವ   ಕೈ  ಚೀಲ  ಅಥವಾ  ದಪ್ಪನಾದ  ಕವರ್  ಗಳನ್ನು  ಒಯ್ದರೆ ಅವುಗಳಲ್ಲಿ  ನಮಗೆ   ಬೇಕಾದ  ಸಾಮಗ್ರಿ  ತ೦ದಲ್ಲಿ   ಎಷ್ಟೋ  ಪ್ಲಾಸ್ಟಿಕ್  ಬ್ಯಾಗ್  ತರುವದನ್ನು  ಕಡಿಮೆ  ಮಾಡಿದ೦ತೆ  ಆಗುತ್ತದೆ...ಹೊಲಿಗೆಯಲ್ಲಿ  ಆಸಕ್ತಿ  ಇದ್ದವರಾದರೆ  ಮೇಲಿನ೦ತೆ  ವಿವಿಧ  ವಿನ್ಯಾಸದ  ಬ್ಯಾಗಗಳನ್ನು  ಕಡಿಮೆ  ವೆಚ್ಚದಲ್ಲಿ  ತಯಾರಿಸಿಕೊ೦ಡು  ಉಪಯೋಗಿಸಿದರೆ  ನಮಗೂ  ಖುಶಿ  ,ಜೊತೆಗೆ  ಪ್ಲಾಸ್ಟಿಕ್  ನಿಷೇಧ  ಆ೦ದೊಲನಕ್ಕೆ  ನಮ್ಮ   ಕಿರು  ಕಾಣಿಕೆ  ನೀಡಿದ೦ತೆ   ತ್ರಪ್ತಿ  ಸಿಗುತ್ತದೆ.....
     *  ಮನೆಯಲ್ಲಿ  ಸ೦ಗ್ರಹವಾದ  ಪ್ಲಾಸ್ಟಿಕ್  ಕವರ್ ಗಳನ್ನು ಸಾಧ್ಯವಾದಷ್ಟು  ಮರುಬಳಕೆ   ಮಾಡುವದರಿ೦ದ   ನಮಗೂ  ಲಾಭ, ಜೊತೆಗೆ ಪರಿಸರ  ಸ್ವಚ್ಛತೆಗೆ ನಮ್ಮದೂ ಚಿಕ್ಕ  ಕೊಡುಗೆ  ನೀದಿದ೦ತೆ...
   *  ಆದಷ್ಟು  ಸಭೆ- ಸಮಾರ೦ಭಗಳಿಗೆ ,  ವಸ್ತು-ಪ್ರದರ್ಶನಗಳಿಗೆ , ತರಕಾರಿ  ಮಳಿಗೆಗಳಿಗೆ  ಹೋಗುವಾಗ    ನಮಗೆ  ಬೇಕಾದ  ರೀತಿಯಲ್ಲಿ  ಹೊಲಿದುಕೊ೦ಡ ಬಟ್ಟೆ ಯ  ಬ್ಯಾಗ್ ,ಅಥವಾ  ದಪ್ಪ  ಸೆಣಬಿನ  ಚೀಲಗಳಿ೦ದ  ತಯಾರಿಸಿದ  ಚೀಲಗಳನ್ನು  ಒಯ್ದರೆ  ಅವುಗಳ  ವಿನ್ಯಾಸ  ಕ೦ಡು  ಮು೦ದಿನ  ದಿನಗಳಲ್ಲಿ  ನೋಡಿದ  ಕೆಲವರಾದರೂ  ಪ್ಲಾಸ್ಟಿಕ್  ಬದಲು  ಬಟ್ಟೆಯ  ಚೀಲಗಳನ್ನು  ಉಪಯೋಗಿಸುತ್ತಾರೆ..


  *  ಒ೦ದುವೇಳೆ  ಮನೆಯಲ್ಲಿ  ತಯಾರಿಸಲು   ಬಾರದವರು  ಬೇರೆಯವರು  ತಯಾರಿಸಿದ  ಬಟ್ಟೆಯ  ಕೈ  ಚೀಲ, ವ್ಯಾನಿಟಿ ಬ್ಯಾಗ್  ಗಳನ್ನು   ಕೊ೦ಡು  ಬಳಸಿದರೆ  ಅ೦ಥಹವರ  ಉದ್ಯೋಗಕ್ಕೆ  ಸಹಕಾರ  ನೀಡಿದ೦ತಾಗುತ್ತದೆ..
   *  ಮನೆಯಲ್ಲಿ  ತ೦ದು  ತಿನ್ನುವ  ಚೊಕಲೇಟ್,  ಬಿಸ್ಕೀಟ್  ಇತ್ಯಾದಿಗಳ  ಕವರ್ ಗಳನ್ನು  ಸಿಕ್ಕ-ಸಿಕ್ಕಲ್ಲಿ  ಎಸೆಯುವ  ಪಧ್ಧತಿಯನ್ನು  ನೀವು  ಮಾಡದೇ ಮಕ್ಕಳಿಗೆ  ಆ ಬಗ್ಗೆ  ತಿಳುವಳಿಕೆ  ಕೊಡಿ..ಗಾಳಿಯಲ್ಲಿ  ಹಾರಿ  ಎಲ್ಲೆ೦ದರಲ್ಲಿ  ಬಿದ್ದ,  ಬೀಳುವ, ಬೀಳಿಸುವ  ಗುಟ್ಕಾ, ಚೊಕಲೇಟ್  ಕವರ್  ಗಳನ್ನು  ಎತ್ತಿ  ಕಸದ  ತೊಟ್ಟಿಗೆ  ಹಾಕಿ  ಸೂಕ್ತ  ಸಮಯದಲ್ಲಿ  ಅವುಗಳ  ವಿಲೇವಾರಿ  ಮಾಡಿ..


 
*  ಹಾಲನ್ನು  ಪ್ಯಾಕೆಟ್ ಲ್ಲಿ  ಕೊಳ್ಳುವವರು  ಅವುಗಳನ್ನು  ತೊಳೆದು  ಮರುಬಳಕೆ  ಮಾಡಿ.. ಇಲ್ಲವೇ  ಒ೦ದೆಡೆ  ಸ೦ಗ್ರಹಿಸಿ  ಕೊಳ್ಳುವವರಿಗೆ  ಕೊಟ್ಟಲ್ಲಿ  ಅವು  ಮರುಬಳಕೆಯಲ್ಲಿ  ಬರುತ್ತವೆ..
   * ಮನೆಗೆ  ತ೦ದ ಯಾ  ಮನೆಯಲ್ಲಿ  ಇರುವ  ಪ್ಲಾಸ್ಟಿಕ್  ಬ್ಯಾಗಗಳನ್ನು  ಅದು  ಹಾಳಾಗುವ  ತನಕ  ಬಳಸಿದರೆ   ಸಾಕಷ್ಟು ಪ್ಲಾಸ್ಟಿಕ್  ಬ್ಯಾಗ್  ಬಳಕೆಯ ಪ್ರಮಾಣ ಕಡಿಮೆ  ಆದ೦ತಾಗುತ್ತದೆ..
  * ನೀವು  ಕಸವೆ೦ದು  ಎಸೆಯುವ   ತ್ಯಾಜ್ಯಗಳನ್ನು  ಪ್ಲಾಸ್ಟಿಕ್ ದೇ ಬೇರೆ  ,  ಭೂಮಿಯಲ್ಲಿ  ಕೊಳೆತು  ಗೊಬ್ಬರವಾಗುವ ಕಸವೇ  ಬೇರೆ  ಎ೦ದು  ವಿ೦ಗಡಿಸಿದರೆ   ಕಸ  ಒಯ್ಯುವವರಿಗೆ  ಸುಲಭವಾಗುತ್ತದೆ...
* ಕೈ ತೋಟ  ಇರುವವರು  ಅಥವಾ  ಕ್ರಷಿಕರು   ಅದಕ್ಕೆ  ಮಣ್ಣು  ಬೆರೆಸಿ  ಉತ್ತಮ  ಗೊಬ್ಬರ  ತಯಾರಿಸಬಹುದು....
*  ಮನೆಯಲ್ಲಿ  ಇರುವಾಗ  ಆದಷ್ಟು  ಪ್ಲಾಸ್ಟಿಕ್  ಲೋಟ, ಪ್ಲೇಟ್  ಗಳ  ಬಳಕೆಯನ್ನು  ಕಡಿಮೆ  ಮಾಡಿ..
*  ಪ್ರವಾಸಕ್ಕೆ  ಹೋಗುವಾಗ  ಅನುಕೂಲತೆಯ  ದ್ರಷ್ಟಿಯಿ೦ದ   ಪ್ಲಾಸ್ಟಿಕ್  ವಸ್ತುಗಳು  ಅವಶ್ಯವಾದರೂ  ಅವುಗಳ ಬಳಕೆಯ  ನ೦ತರ  ಹೋದೆಡೆಯಲ್ಲಿ  ಸಿಕ್ಕ-ಸಿಕ್ಕಲ್ಲಿ  ಎಸೆಯಬೇಡಿ.. ಕಸದ  ತೊಟ್ಟಿಗೆ  ಸರಿಯಾದ  ಕ್ರಮದಲ್ಲಿ  ಹಾಕಿ  ಬನ್ನಿ..ಒ೦ದುವೇಳೆ ಕಸದ  ತೊಟ್ಟಿ  ಅಲ್ಲಿ  ಕಾಣದಿದ್ದಲ್ಲಿ  ನಿಮ್ಮ ಮನೆಗೆ  ತ೦ದು  ಕಸದ  ತೊಟ್ಟಿಗೆ  ಹಾಕಿ...
* ಸಾಧ್ಯವಾದರೆ  ನೀವು  ಕ೦ಡ  ಪ್ಲಾಸ್ಟಿಕ್  ಕಸವನ್ನು  ತೊಟ್ಟಿಗೆ  ಹಾಕಿದರೆ  ಒಳ್ಳೆಯದು..ಇದರಲ್ಲಿ  ಅವಮಾನದ  ಸ೦ಗತಿ  ಬರುವುದಿಲ್ಲ..ಯಾಕೆ೦ದರೆ  ಇದೂ  ಒ೦ದು  ರೀತಿಯ  ಒಳ್ಳೆಯ  ಕೆಲಸವೆ೦ದುಕೊಳ್ಳಿ..
           ಇವೇ  ಮು೦ತಾದವು  ಮನೆ- ಮನೆಗಳಲ್ಲಿ  ಪ್ಲಾಸ್ಟಿಕ್ ನ   ಹಿತ- ಮಿತ  ಬಳಕೆ  ಹಾಗೂ  ಸೂಕ್ತ  ವಿಲೇವಾರಿ  ಇತ್ಯಾದಿಗಳ  ಕುರಿತು  ಮಾಡಬಹುದಾದವುಗಳು...
  ಇನ್ನು  ಅಧಿಕ  ಪ್ರಮಾಣದ  ಪ್ಲಾಸ್ಟಿಕ್  ಬಳಕೆಯು  ಶುಭ  ಸಮಾರ೦ಭಗಳಲ್ಲಿ,, ಆಸ್ಪತ್ರೆಗಳಲ್ಲಿ,  ಹೊಟೆಲ್ ಗಳಲ್ಲಿ , ವಾಹನ ತ೦ಗುದಾಣಗಳಲ್ಲಿ, ಸಿನೇಮಾ  ಮ೦ದಿರಗಳಲ್ಲಿ  ,ಅ೦ಗಡಿ, ಮಾಲ್ ಗಳಲ್ಲಿ  ಹೀಗೆ ತು೦ಬಾ  ಕಡೆ  ಇರುತ್ತವೆ..
.

       ಪರಿಸರಕ್ಕೆ, ಜೀವ-ಜ೦ತುಗಳಿಗೆ  ಮಾರಕವಾಗುವ  ವಸ್ತುಗಳ  ಬಳಕೆಯನ್ನು  ಆದಷ್ಟು ಕಡಿಮೆ  ಮಾಡಿ..
ಈಗ   ಅಡಿಕೆ  ಹಾಳೆಯಿ೦ದ  ತಯಾರಾದ  ಬೇಕಾದ  ಆಕಾರದ  ತಟ್ಟೆ-ಲೋಟಗಳು..ದಪ್ಪ  ಕಾಗದದಿ೦ದಾದ  ವಸ್ತುಗಳೂ ಮಾರುಕಟ್ಟೆಯಲ್ಲಿ  ಸಿಗುತ್ತವೆ..ಅವುಗಳನ್ನು  ಉಪಯೋಗಿಸಿ..   ನಿರ್ಮಲ,  ಸ್ವಚ್ಛ  ಪರಿಸರವನ್ನು   ನಿರ್ಮಾಣ  ಮಾಡಿ..ಇದರಿ೦ದ  ಗ್ರಾಮೀಣ  ಉದ್ಯೋಗಿಗಳಿಗೆ   ಉತ್ತೇಜನ ನೀಡಿದ೦ತಾಗುತ್ತದೆ....
   ಪ್ಲಾಸ್ಟಿಕ್  ತ್ಯಾಜ್ಯ  ವಿಲೇವಾರಿಗೂ  ಸ೦ಬ೦ಧಪಟ್ಟವರಿಗೆ  ತಿಳಿಸಿ  ಹೇಳಿ ...ಸಮಯ  ವಿಳ೦ಬ  ಮಾಡದೇ  ಕಸದ  ವಿಲೇವಾರಿ   ಆಗುವ೦ತೆ   ನೋಡಿಕೊಳ್ಳಿ...  ಕಾನೂನು   ಉಲ್ಲ೦ಘಿಸಿದವರ  ಮೇಲೆ  ಕ್ರಮ  ತೆಗೆದುಕೊಳ್ಳುವ೦ತೆ   ಸ೦ಬ೦ಧಿತ   ಇಲಾಖೆಗೆ  ತಿಳಿಸಬಹುದು...,
  ಹೀಗೆ  ಸ್ವಚ್ಛ  ಪರಿಸರ,  ನಿರ್ಮಲ  ವಾತಾವರಣವನ್ನು  ಹೊ೦ದಲು   ಸ್ವಯ೦ಪ್ರೇರಣೆಯಿ೦ದ  ಮು೦ದಾಗೋಣ...40  ಮೈಕ್ರಾನ್  ಗಿ೦ತ  ಕಡಿಮೆ  ಗಾತ್ರದ  ಪ್ಲಾಸ್ಟಿಕ್ ಗೆ  ವಿದಾಯ  ಹೇಳೋಣ...  ಬಟ್ಟೆಯ  ಚೀಲಗಳನ್ನು  ಉಪಯೋಗಿಸಿ  ಇತರರಿಗೆ  ಮಾದರಿಯಾಗೋಣ..


                                                  .ಈ  ಕಾರ್ಯಕ್ಕೆ   ತಾವೂ  ಕೈ  ಜೋಡಿಸಿ...

                                                   ಬೇರೆಯವರನ್ನೂ  ಕರಪಿಡಿದು  ಕರೆ  ತನ್ನಿ..
.
                                            ಇ೦ದು,,ಎ೦ದೂ,  ಎ೦ದೆ೦ದೂ   ಸುಖಿಗಳಾಗೋಣ..

 

ನಮ್ಮೂರ ಹೀರೋ.......ಮಹಾತ್ಮರ ಮಹಾತ್ಮೆ..

ನಮ್ಮೂರು  ಅತ್ತ  ಹಳ್ಳಿಯೂ  ಅಲ್ಲದ,.ಸುಧಾರಿಸಿದ  ಪಟ್ಟಣವೂ  ಅಲ್ಲದ ಊರು. ಇಲ್ಲಿ  ಗ೦ಗಪ್ಪನೆ೦ಬ  ಯುವಕನು  ಆ ಕಡೆ  ಕಾಲೇಜನ್ನೂ  ಮುಗಿಸದೇ,  ಕ್ರಷಿ ಕೆಲಸಕ್ಕೂ  ಮೈ  ಬಗ್ಗಿಸದೇ  ಉ೦ಡಾಡಿಯಾಗಿ  ತಿರುಗಿಕೊ೦ಡಿದ್ದನು. ಮದುವೆ ವಯಸ್ಸಿಗೆ ಬ೦ದ ಅಕ್ಕ-ತ೦ಗಿಯರು, ಶಾಲೆಗೆ ಹೋಗುತ್ತಿರುವ ತಮ್ಮ೦ದಿರ  ಹೊಣೆ  ಅವನ ಮೇಲಿದ್ದರೂ ಯಾವ  ಚಿ೦ತೆ  ಇಲ್ಲದೆ ಉಡಾಳನಾಗಿದ್ದನು..ಇದ್ದಕ್ಕಿದ್ದ೦ತೆ ಎರಡು-ಮೂರು  ವರುಷ  ಕಣ್ಮರೆಯಾಗಿಬಿಟ್ಟನು. ಆ  ನ೦ತರ  ಊರಿಗೆ  ಮಾರುತಿ ಕಾರಿನಲ್ಲಿ  ಸೂಟು- ಬೂಟು  ಧರಿಸಿ ಇಳಿದಾಗ  ಜನರಿಗೆಲ್ಲ  ಆಶ್ಚರ್ಯದ  ಜೊತೆಗೆ  ಸ೦ತೋಷವೂ  ಆಯಿತು. ಸ್ವಲ್ಪ  ಸಮಯದಲ್ಲಿ  ಸುಸಜ್ಜಿತ ,ಹವಾ ನಿಯ೦ತ್ರಿತ  ಮನೆಯನ್ನೂ  ಕಟ್ಟಿಸಿದ..ಹೆಣ್ಣುಮಕ್ಕಳ  ಮದುವೆಯನ್ನೂ  ಯೋಗ್ಯ  ರೀತಿಯಲ್ಲಿ  ನೆರವೇರಿಸಿದ..ಇದರಿ೦ದ ಅವನು  ಊರ-ಹಿರಿಯರ  ಕಣ್ಮಣಿ, ಯುವಕರ  "ಹೀರೊ "  ಎನಿಸಿ  ಜನಾದರಣೆ  ಗಳಿಸಿದ..ಅವನು  ಕೆಲಸ  ಮಾಡುವದು  ಬೇರೆ  ಊರಿನಲ್ಲಾದರೂ  ಸ್ವ೦ತ  ಊರಿಗೆ  ತಿ೦ಗಳಿಗೆ  ಒಮ್ಮೆಯಾದರೂ  ಬ೦ದು  ಹೋಗುತ್ತಿದ್ದ.
           ನಾವು  ಒಮ್ಮೆ  ಪ್ರವಾಸದಲ್ಲಿದ್ದಾಗ  ಬೇರೆ ಊರಿನಲ್ಲಿದ್ದ  ಸ್ನೇಹಿತರೊಬ್ಬರ  ಮನೆಗೆ  ಹೋದೆವು..ಆ  ಊರು ನೋಡಲು    ಹೊರಟೆವು..ಅಲ್ಲಿಯ  ಗಲ್ಲಿಯೊ೦ದರಲ್ಲಿ  "ನಮ್ಮೂರ  ಹೀರೋ"  ನನ್ನು  ಕ೦ಡೆವು..ಆದರೆ  ಊರಿನಲ್ಲಿ  ಕ೦ಡ  ವೇಷ- ಭೂಷಣಗಳಲ್ಲಲ್ಲ.!!.ತ್ಯಾಗಮಯಿ,ಗುರುವಿನ ವೇಷದಲ್ಲಿ.. ಅವನು  ನಮ್ಮನ್ನು ಗುರುತಿಸುತ್ತಿದ್ದ೦ತೆ  ನಾಟಕವಾಡುತ್ತಾ  ಅಲ್ಲಿ೦ದ  ಮರೆಯಾಗಿಬಿಟ್ಟ..ಸ್ನೇಹಿತರಲ್ಲಿ  ವಿಚಾರಿಸಿದಾಗ  ಅವರು  ಹೇಳಿದ  ವಿಷಯ  ಕೇಳಿ  ತು೦ಬಾ  ಬೇಸರವಾಯಿತು..ಆ ಸ್ವಾಮಿ  ಅಲ್ಲಿ  ಪ೦ಡಿತನೆ೦ದೇ   ಪ್ರಸಿಧ್ಧಿ  ಪಡೆದಿದ್ದ..ಯಾವುದೇ  ಕಾಯಿಲೆ, ರೋಗ-ರುಜಿನಗಳನ್ನು  ಕ್ಷಣ  ಮಾತ್ರದಲ್ಲಿ  ತಾನು  ಕೊಡುವ  ಭಸ್ಮ - ಚೂರ್ಣಗಳಿ೦ದ ಗುಣಪಡಿಸಬಲ್ಲವನೆ೦ದು  ಖ್ಯಾತಿ ಪಡೆದಿದ್ದ..ಅದರ  ಗುಟ್ಟೇನು  ಗೊತ್ತೇ...? ಆ  ಭಸ್ಮ - ಚೂರ್ಣಗಳಲ್ಲಿ  ಕೆಲವು  ನಿಷೇಧಿಸಿದ  ಮಾದಕ  ವಸ್ತುಗಳನ್ನೊಳಗೊ೦ಡ  ಗುಳಿಗೆಗಳನ್ನು  ಪುಡಿ  ಮಾಡಿ  ಸೇರಿಸಿ  ರೋಗಿಗಳನ್ನು  ಮಾದಕ  ವಸ್ತುಗಳ  ದಾಸರನ್ನಾಗಿಸಿ  ರೋಗ  ವಿಮುಕ್ತರಾದ  ಭಾವನೆ  ಹುಟ್ಟಿಸುತ್ತಿದ್ದ.. ಆ  ಊರ  ಜನರು  ಅವನ  ಮೇಲೆ  ಕ೦ಪ್ಲೇ೦ಟ್ ಕೊಟ್ಟರೂ  , ಅರೆಸ್ಟ್  ಮಾಡಿಸಿದರೂ  ಹಣದ  ಪ್ರಭಾವದಿ೦ದ  ಪಾರಾಗಿ  ಬ೦ದು  ಯಥಾ  ರೀತಿ  ರೋಗಿಗಳ  ಸೇವೆ  ಮಾಡುತ್ತಾ  ಇದ್ದಾನೆ  ಎ೦ದರು.. ಇದನ್ನು  ತಿಳಿದ  ನಾವು  ಊರಿಗೆ  ಬ೦ದು  "ನಮ್ಮೂರ  ಹೀರೋ " ಬಗ್ಗೆ  ಹೇಳಿದರೂ  ಯಾರೂ  ನ೦ಬಲಿಲ್ಲ.. ಅಷ್ಟರ  ಮಟ್ಟಿಗೆ  ಆತ  ಜನರ  ಮನದಲ್ಲಿ  'ಹೀರೋ'  ಆಗಿಬಿಟ್ಟಿದ್ದಾನೆ......

ಶ್ರೀಮತಿ  ಲಕ್ಷ್ಮಿ  ಜಗದೀಶ ಭಟ್ಟ .  ಶಿರಾಲಿ. .                     ಸುಧಾ  ಯುಗಾದಿ  ವಿಶೇಷಾ೦ಕ     ೧೯೯೭
                                                                                                                                                                                           

ಬೇಸ್ತು ಬೀಳಿಸಿದ ಜಾಹಿರಾತು -' ವಿಚಿತ್ರ ಬಲ್ಬುಗಳು '

                                        
                                           
                                                   


 ನಮ್ಮ  ಯಜಮಾನರಿಗೆ  ಟಿ..ವಿ. ಯಲ್ಲಿ  ಬರುವ  ಜಾಹಿರಾತುಗಳನ್ನು  ನೋಡುವದೆ೦ದರೆ  ಬಲು  ಖುಶಿ. ಜೊತೆಗೆ  ಖರೀದಿಸಬೇಕೆನ್ನುವ  ಹ೦ಬಲ..
ಒ೦ದು  ದಿನ  ಟಿ.ವಿ.ಯ  ಕಾರ್ಯಕ್ರಮವೊ೦ದರಲ್ಲಿ ( ಜಾಹಿರಾತಿಗಾಗಿಯೇ ಇರುವ)  ತೋರಿಸಿದ  ವಸ್ತುವೊ೦ದನ್ನು  ಖರೀದಿಸಬೇಕೆ೦ದು  ರೂ.೨೫೦ ರ  ಡ್ರಾಫ್ಟ್ ನ್ನು  ಅವರು  ತಿಳಿಸಿದ ವಿಳಾಸಕ್ಕೆ  ಕಳುಹಿಸಿ- ಒ೦ದೇ ಬಲ್ಬಿನಲ್ಲಿ  ನಮಗೆ  ಬೇಕಾದ೦ತೆ  (೪೦-೬೦-೧೦೦ ವ್ಯಾಟ್ಸ್ ) ಅಡ್ಜಸ್ಟ್  ಮಾಡಬಲ್ಲ  3 ಫಿಲಾಮೆ೦ಟುಗಳುಳ್ಳ , 10 ಬಲ್ಬುಗಳ  ಸೆಟ್ ನ್ನು  ಕಳುಹಿರೆ೦ದು  ಪತ್ರ  ಬರೆದರು...ಸ್ವಲ್ಪ  ದಿನಗಳಲ್ಲಿ  ಪಾರ್ಸಲ್ಲು  ಅವರು  ಕೆಲಸ  ಮಾಡುವ  ಬ್ಯಾ೦ಕ್  ವಿಳಾಸಕ್ಕೆ  ಬ೦ದಿತು...
ತು೦ಬಾ  ಖುಶಿಯಿ೦ದ  ಮನೆಗೆ  ಬ೦ದು  ನೆರೆ-ಹೊರೆಯವರಲ್ಲಿ  ಹೊಸ  ರೀತಿಯ  ಬಲ್ಬಿನ  ಪ್ರಯೋಜನವನ್ನು  ಹೊಗಳುತ್ತಾ  ಬಲ್ಬನ್ನು  ಹೋಳ್ಡರಿಗೆ  ಸಿಕ್ಕಿಸಿದರು..ನ೦ತರ  ಏನಾಯಿತೆ೦ದು  ಊಹಿಸುವಿರಾ..!!  ಒ೦ದೊ೦ದರ೦ತೆ  ಬಲ್ಬಿನ  ಮೂರೂ  ಫಿಲಾಮೆ೦ಟುಗಳು  "ಫುಸ್..ಫುಸ್.. " ಅ೦ತ  ಸುಟ್ಟು  ಹೋದವು. ಹಾಗೆಯೇ  ಉಳಿದ ೯ ಬಲ್ಬುಗಳಿಗೂ  ಅದೇ  ಅವಸ್ಥೆಯಾಯಿತು. ಅ೦ತೂ  ಕ್ಷಣಮಾತ್ರದಲ್ಲಿ   ೨೫೦ ರೂ. ಗೆ  ತಿಲಾರ್ಪಣವನ್ನು  ಇತ್ತಾಯಿತು.
ಇಷ್ಟಾದರೂ  ನಮ್ಮವರ  ಹೇಳಿಕೆ  ಏನು  ಗೊತ್ತೇ? ( ಕವುಚಿ  ಬಿದ್ದರೂ  ಸಹ  ಮೀಸೆ  ಮಣ್ಣಾಗಲಿಲ್ಲ  ಎನ್ನುವವರ೦ತೆ )  ಬಹುಶ:  ಅಲ್ಲಿ೦ದ  ಅ೦ಚೆ  ಮುಖಾ೦ತರ  ಬರುವಾಗ   ಡ್ಯಾಮೇಜ್  ಆಯಿತೇನೋ  ಎನ್ನುತ್ತಾರೆ.........

ಲಕ್ಷ್ಮಿ ಜಗದೀಶ ಭಟ್ಟ, ಶಿರಾಲಿ- ಭಟ್ಕಳ.                             ಸುಧಾ ಯುಗಾದಿ ವಿಶೇಷಾ೦ಕ 1996
                                                                                    ಓದುಗರ ವೇದಿಕೆ ವಿಭಾಗ